ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Human Resources in Kannada

0
601
ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Human Resources in Kannada
ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Human Resources in Kannada

ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ Information About Human Resources manava sampanmulagala bagge mahiti in kannada


Contents

ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ

Information About Human Resources in Kannada
Information About Human Resources in Kannada

ನೈಸರ್ಗಿಕ ಸಂಪನ್ಮೂಲಗಳ ಹಾಗೆಯೇ, ಜನಸಂಖ್ಯೆಯನ್ನೂ ಸಹ ಒಂದು ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಒಂದು ದೇಶದಲ್ಲಿ ವಾಸಿಸುತ್ತಿರುವ ಜನರು ದೇಶದ ಜನಸಂಖ್ಯೆ ಆಗಿದ್ದು ಅವರಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರಿಕರಿದ್ದಾರೆ.೧೪ ವರ್ಷದ ವಯಸ್ಸಿನ ಒಳಗಿರುವವರನ್ನು ಮಕ್ಕಳೆಂತಲೂ, ೧೫ ವರ್ಷದ ಮೇಲ್ಪಟ್ಟು ೬೦ ವರ್ಷದ ಒಳಗಿನವರನ್ನು ವಯಸ್ಕರೆಂತಲೂ ಮತ್ತು ೬೦ ವರ್ಷದ ಮೇಲ್ಪಟ್ಟವರನ್ನು ಹಿರಿಯ ನಾಗರಿಕರೆಂತಲೂ ಗುರುತಿಸಲಾಗಿದೆ. ವಯಸ್ಕರು ದುಡಿಯಲು ಸಮರ್ಥರು. ಇವರನ್ನು ದುಡಿಯುವ ಜನರು ಎನ್ನುತ್ತೇವೆ. ಈ ದುಡಿಯುವ ಜನರನ್ನು ಮಾನವ ಸಂಪನ್ಮೂಲ ಎಂದು ಕರೆಯಲಾಗುತ್ತಿದೆ. ಈಗ ಭಾರತದಲ್ಲಿ ಯುವಕರೇ ಹೆಚ್ಚಾಗಿರುವುದರಿಂದ, ದುಡಿಯುವ ಶಕ್ತಿ ಹೆಚ್ಚಾಗಿದೆ.

ಶಿಕ್ಷಣ ಮತ್ತು ತರಬೇತಿ ಪಡೆದ ಆರೋಗ್ಯವಂತ ಜನರ ದುಡಿಯುವ ಸಾಮರ್ಥ್ಯ ಹೆಚ್ಚಾಗಿರುವುದನ್ನು ನಮ್ಮ ಪರಿಸರದಲ್ಲಿ ನಾವು ಗಮನಿಸಬಹುದು, ಇದರಿಂದ ರಾಷ್ಟ್ರದ ಆದಾಯ ಹೆಚ್ಚುತ್ತದೆ. ಹಾಗಾಗಿ ವಿದ್ಯಾವಂತ ಹಾಗೂ ಆರೋಗ್ಯವಂತ ದುಡಿಯುವ ಜನರೇ ದೇಶದ ಮಾನವ ಸಂಪತ್ತು. ಸರಕು-ಸೇವೆಗಳ ಉತ್ಪಾದನೆಯಲ್ಲಿ ನಿಸರ್ಗ ಸಂಪತ್ತು ಉತ್ಪಾದನೆಗೆ ಬೇಕಾದ ಜ್ಞಾನ ಮತ್ತು ಶ್ರಮಶಕ್ತಿಯನ್ನು ಒದಗಿಸುತ್ತದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ವಿವಿಧ ಉದ್ಯೋಗಗಳಲ್ಲಿ ದುಡಿಯುತ್ತಿರುವ ಜನರನ್ನು ಶ್ರಮ ಶಕ್ತಿ ಎನ್ನುತ್ತೇವೆ.

ಭಾರತದ ಜನಸಂಖ್ಯೆಯ ಲಕ್ಷಣಗಳು

ಜನಸಂಖ್ಯೆಯ ಲಕ್ಷಣಗಳೆಂದರೆ, ಅದರ ಗಾತ್ರ, ರಚನೆ, ಸಾಂದ್ರತೆ, ಗುಣಮಟ್ಟ, ಇತ್ಯಾದಿಗಳಿಗೆ ಸಂಬಂಧಪಟ್ಟಂಥ ಅಂಶಗಳಾಗಿವೆ. ಯಾವುದೇ ರಾಷ್ಟ್ರದ ಜನಸಂಖ್ಯಾ ಸಂಬಂಧಿ ಸಮಸ್ಯೆಗಳನ್ನು ಅರಿಯಲು ಅದರ ಲಕ್ಷಣಗಳ ಸಂಪೂರ್ಣ ಮಾಹಿತಿ ಹೊಂದಿರುವುದು ಅವಶ್ಯಕ.

ಅಗಾಧ ಗಾತ್ರ ಹಾಗೂ ತೀವ್ರ ಬೆಳೆವಣಿಗೆ :

೨೦೧೧ರಲ್ಲಿ ೧೨೧.೧ ಕೋಟಿ ಜನರನ್ನು ಹೊಂದಿದ್ದ ಭಾರತವು, ಚೀನಾ ದೇಶದ ನಂತರದಲ್ಲಿ, ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನರನ್ನುಳ್ಳ ದೇಶವಾಗಿದೆ. ವಿಶ್ವದ ಪ್ರತಿ ಆರನೆಯ ವ್ಯಕ್ತಿಯು ಭಾರತೀಯನಾಗಿರುವನು. ವಾರ್ಷಿಕ ಪ್ರತಿಶತ ೧.೮ರ ದರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಆಸ್ಟ್ರೇಲಿಯ ದೇಶದಲ್ಲಿರುವಷ್ಟು ಜನರು ಸೇರಿಕೊಳ್ಳುತ್ತಿದ್ದಾರೆಂದರೆ ಅದರ ಅಗಾಧತೆಯನ್ನು ನೀವು ಗಮನಿಸಬಹುದು. ಇಂಥ ಪರಿಸ್ಥಿತಿಯನ್ನು ʼಜನಸಂಖ್ಯಾ ಸ್ಫೋಟʼ ಎಂದು ಕರೆಯಲಾಗುತ್ತದೆ. ೨೦೨೨ನೆಯ ಇಸವಿಯ ಹೊತ್ತಿಗೆ, ನಾವು ವಿಶ್ವದ ಅತಿ ಹೆಚ್ಚು ಜನರುಳ್ಳ ರಾಷ್ಟ್ರವಾಗುತ್ತೇವೆ.

ಜನಸಂಖ್ಯಾ ಪರಿವರ್ತನೆಯ ಎರಡನೆಯ ಹಂತ:

ಭಾರತವು ಸದ್ಯ ಜನಸಂಖ್ಯಾ ಪರಿವರ್ತನೆಯ ಎರಡನೆಯ ಹಂತದಲ್ಲಿದ್ದು, ಮರಣ ದರವು ಕಡಿಮೆ ಇದ್ದು ಜನನ ದರವು ಇನ್ನೂ ಅಧಿಕವಾಗಿಯೇ ಇದೆ. ೨೦೧೦ನೇ ವರ್ಷದಲ್ಲಿ ಜನನ ದರವು ೨೨.೧ ಇದ್ದರೆ, ಮರಣ ದರವು ೭.೨ ಇದ್ದಿತು, ಅಂದರೆ ಆ ವರ್ಷ, ಪ್ರತಿ ಸಾವಿರ ಜನಸಂಖ್ಯೆಗೆ ೧೫ಕ್ಕೂ ಹೆಚ್ಚಿನ ಸಂಖ್ಯೆಯ ಜನರ ಸೇರ್ಪಡೆ ಆಗುತ್ತಿತ್ತು. ಇದನ್ನು ತುಂಬಾ ಅಧಿಕವೆಂದೇ ಭಾವಿಸಲಾಗುತ್ತದೆ.

ತ್ರೀವ್ರ ಏರುತ್ತಿರುವ ಸಾಂದ್ರತೆ :

ಒಂದು ಚದರ ಕಿಲೋ ಮೀಟರ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆಗೆ ಜನಸಾಂದ್ರತೆ ಎನ್ನುತ್ತೇವೆ. ಒಂದು ದೇಶದಲ್ಲಿರುವ ಒಟ್ಟು ಜನಸಂಖ್ಯೆಯನ್ನು ಅಲ್ಲಿನ ಒಟ್ಟು ಭೂವಿಸ್ತೀರ್ಣದಿಂದ ಭಾಗಿಸುವ ಮೂಲಕ ಜನಸಂದ್ರಾತೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ೨೦೧೧ ರಲ್ಲಿ ಭಾರತದ ಜನಸಾಂದ್ರತೆ ೩೮೨ ಇತ್ತು. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಹೆಚ್ಚಾಗಿರುವುದು ಕಂಡುಬರುತ್ತದೆ.

ಅನಾನುಕೂಲಕರ ಲಿಂಗ ಅನುಪಾತ:

ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಲಿಂಗ ಅನುಪಾತವೆಂದು ವ್ಯಾತ್ಯಾಸಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಲಿಂಗ ಅನುಪಾತವು ಕೇವಲ ೯೪೩ ಇದ್ದು ಇದು ಮಹಿಳಾ ಸಬಲೀಕರಣ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿ ಹಿನ್ನಲೆಯಲ್ಲಿ ಅನಾನುಕೂಲಕರವಾಗಿದೆ.

ಕೆಳವಯಸ್ಸಿನವರು ಅಧಿಕವಿರುವ ವಯೋಮಾನ ರಚನೆ:

ಭಾರತದ ಜನಸಂಖ್ಯಾ ರಚನೆಯಲ್ಲಿ ಕೆಳ ವಯಸ್ಸಿನ ಅಂದರೆ ೦-೧೪ ವಯೋಮಾನದ ಮಕ್ಕಳ ಪ್ರಮಾಣವು ಅಧಿಕವಿದೆ. ೨೦೧೧ರ ಜನಗಣತಿಯ ಪ್ರಕಾರ ಈ ವಯೋಮಾನದವರು ಜನಸಂಖ್ಯೆಯ ಶೇ. ೩೦.೭ರಷ್ಟಿದ್ದರು. ಇದು ಅಧಿಕ ಅವಲಂಬಿತ ಜನಸಂಖ್ಯೆಯ ಪ್ರಮಾಣವನ್ನು ತೋರಿಸುತ್ತದೆ ಮತ್ತು ಇದನ್ನು ಜನನ ದರವನ್ನು ನಿಯಂತ್ರಿಸುವುದರ ಮೂಲಕ ಕಡಿಮೆ ಮಾಡಬಹುದಾಗಿದೆ.

ಅಧಿಕ ಗ್ರಾಮೀಣ ಜನಸಂಖ್ಯೆಯ ಪ್ರಮಾಣ:

ಒಂದು ದೇಶದಲ್ಲಿರುವ ನಗರ-ಗ್ರಾಮೀಣ ಜನಸಂಖ್ಯೆಯು ಅನುಪಾತವು ಆ ದೇಶದ ಔದ್ಯಮೀಕರಣದ ಸೂಚಿಯಾಗಿ ಪರಿಗಣಿತವಾಗಿದೆ. ಭಾರತದ ಜನಸಂಖ್ಯೆಯು ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿದ್ದು, ೨೦೧೧ರಲ್ಲಿ ಶೇ. ೬೮.೮ ಜನರು ಗ್ರಾಮವಾಸಿಗರಾಗಿದ್ದರು. ಇದು ಭಾರತದ ನಗರೀಕರಣ ಪ್ರಕ್ರಿಯೆ ಕಡಿಮೆ ಹಾಗೂ ನಿಧಾನಗತಿಯಾಗಿರುವುದನ್ನು ಬಿಂಬಿಸುತ್ತದೆ.

ಜನಸಂಖ್ಯೆಯ ಕಳಪೆ ಗುಣಮಟ್ಟ:

ಜನಸಂಖ್ಯೆಯ ಗುಣಮಟ್ಟವನ್ನು ಅವರ ಶಿಕ್ಷಣ, ಕೌಶಲಗಳು ಮತ್ತು ಆರೋಗ್ಯ ಸ್ಥಿತಿಗಳಿಂದ ಅಂದರೆ ನಿರ್ದಿಷ್ಟವಾಗಿ, ಸಾಕ್ಷರತಾ ದರ, ಕೌಶಲಗಳ ಗಳಿಕೆ ಮತ್ತು ನಿರೀಕ್ಷಿತ ಜೀವಿತಾವಧಿಗಳ ಮೂಲಕ ಅಳೆಯಬಹುದಾಗಿದೆ.

a)ಕಡಿಮೆ ಸಾಕ್ಷರತಾ ದರ :

ಭಾರತವು ಇನ್ನೂ ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಸಾಧಿಸಿಲ್ಲ. ಸಾಕ್ಷರತೆಯೆಂದರೆ ಓದಲು ಮತ್ತು ಬರೆಯಲು ಗೊತ್ತಿರುವ ಜನರ ಪ್ರತಿಶತ ಪ್ರಮಾಣ. ೨೦೧೧ರಲ್ಲಿ ಭಾರತದ ಶೇ. ೭೪ರಷ್ಟು ಜನರು ಮಾತ್ರ ಓದು-ಬರಹ ಬಲ್ಲವರಾಗಿದ್ದರು. ಸುಮಾರು ೩೧ ಕೋಟಿಗಿಂತಲೂ ಅಧಿಕ ಜನರು ನಿರಕ್ಷರಿಗಳಾಗಿದ್ದರು ಎಂಬುದನ್ನು ಇದು ಹೇಳುತ್ತದೆ. ಮಹಿಳೆಯರ ಸಾಕ್ಷರತೆ ಇನ್ನೂ ಕಡಿಮೆ ಇದ್ದು ಕೇವಲ ಶೇ. ೬೫ರಷ್ಟು ಮಹಿಳೆಯರು ಸಾಕ್ಷರರಾಗಿದ್ದರು.

b)ಅಲ್ಪ ಪ್ರಮಾಣದ ಶಿಕ್ಷಣ ಮತ್ತು ತರಬೇತಿ :

ಭಾರತದಲ್ಲಿ ೨೦-೨೫ ವರ್ಷ ವಯೋಮಾನದವರಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾದ ವ್ಯಕ್ತಿಗಳ ಪ್ರಮಾಣ ಕೇವಲ ಶೇ. ೨೦.೪ ಇದ್ದು, ಇದು ತುಂಬಾ ಕಡಿಮೆ ಪ್ರಮಾಣದ್ದು. ಇದು ಮುಂದುವರೆದ ರಾಷ್ಟ್ರಗಳಲ್ಲಿ ಇರುವ ಪ್ರಮಾಣ ಕೇವಲ ಕಾಲುಭಾಗ ಮಾತ್ರ. ಅಲ್ಲದೇ ಭಾರತದಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ವೈದ್ಯರ ಪ್ರಮಾಣವು ಕೇವಲ ೦.೭ ಇದ್ದರೆ, ಇಂಜಿನಿಯರರ ಪ್ರಮಾಣವು ೨೧೦ ಇದೆ. ಇದು ಕೌಶಲಗಳಲ್ಲಿನ ಅಸಮತೋಲನ ಹಾಗೂ ಕಡಿಮೆ ಪ್ರಮಾಣವನ್ನು ಸೂಚಿಸುತ್ತದೆ.

c) ಕಡಿಮೆ ಜೀವಿತಾವಧಿ :

ಒಬ್ಬ ವ್ಯಕ್ತಿ ಜೀವಿಸಬಹುದಾದ ಸರಾಸರಿ ಆಯುಷ್ಯವನ್ನು ಜೀವಿತಾವಧಿ ಎಂದು ಕರೆಯುತ್ತೇವೆ. ಭಾರತದಲ್ಲಿ ೨೦೧೩ರಲ್ಲಿ ಸರಸಾರಿ ಜೀವಿತಾವಧಿಯು ಕೇವಲ ೬೫.೮ ವರ್ಷಗಳಿದ್ದು ಅದು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ತುಂಬಾ ಕಡಿಮೆ.

ಕೆಲಸದಲ್ಲಿ ಭಾಗವಹಿಸುವಿಕೆಯ ಕಡಿಮೆ ದರ:

ಕೆಲಸ ಮಾಡಬಲ್ಲ ಜನರ ಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಪ್ರತಿಶತವಾಗಿ, ಲೆಕ್ಕ ಹಾಕಿದಾಗ, ಆ ಜನಸಂಖ್ಯೆಯ ಕೆಲಸದಲ್ಲಿ ಭಾಗವಹಿಸುವಿಕೆಯ ದರ ದೊರೆಯುತ್ತದೆ. ಭಾರತದಲ್ಲಿ ಈ ಪ್ರಮಾಣವೂ ಕಡಿಮೆ ಇದ್ದು, ೨೦೧೧ರಲ್ಲಿ ಕೇವಲ ಶೇ. ೩೯.೮ರಷ್ಟು ಜನರು ಕೆಲಸಗಾರರಾಗಿದ್ದರು. ಅಂದರೆ, ಕೆಲಸ ಮಾಡದೇ ಇದ್ದು, ಕೆಲಸಗಾರರ ಮೇಲೆ ಹೆಚ್ಚಿನ ಅವಲಂಬಿತ ಜನರ ಪ್ರಮಾಣವನ್ನು ಇದು ತೋರಿಸುತ್ತದೆ.

ಅತಿ-ಜನಸಂಖ್ಯೆ :

ಆಹಾರ ಧಾನ್ಯದ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಸಹ ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ಹಸಿವು, ಅಪೌಷ್ಠಿಕತೆಗಳನ್ನಲ್ಲದೇ, ನಿರುದ್ಯೋಗ, ಕಡಿಮೆ ವರಮಾನ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಪ್ರಮಾಣ, ಮುಂತಾದವುಗಳನ್ನು ಗಮನಿಸಿದಾಗ, ಭಾರತದ ಜನಸಂಖ್ಯೆಯು ಅದರ ಧಾರಣಾ ಶಕ್ತಿಯನ್ನು ಮೀರಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಅತಿಯಾದ ಜನಸಂಖ್ಯೆಯ ಪರಿಣಾಮಗಳಾಗಿವೆ.

ಜನಸಂಖ್ಯಾ ಪರಿವರ್ತನೆ

ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯಾ ಬೆಳವಣಿಗೆ ನಡುವೆ ನಿಕಟ ಸಂಬಂಧವಿದೆ. ದೇಶವು ಆರ್ಥಿಕ ಅಭಿವೃದ್ಧಿ ಹೊಂದಿದಂತೆ, ಆ ದೇಶದ ಜನಸಂಖ್ಯೆಯು ಕಡಿಮೆಯಾಗುತ್ತಾ ಸಾಗುತ್ತದೆ. ಇದನ್ನು ʼಜನಸಂಖ್ಯಾ ಪರಿವರ್ತನೆ ಸಿದ್ಧಾಂತʼದ ಮೂಲಕ ವಿವರಿಸಲಾಗುತ್ತದೆ.

೧. ಹಿಂದುಳಿದ ಹಂತ :

ಒಂದು ದೇಶವು ಆರ್ಥಿಕವಾಗಿ ಹಿಂದುಳಿದಿದ್ದಾಗ ಅಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿರುತ್ತದೆ. ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಇರುವುದಿಲ್ಲ. ಜನರು ಮೂಢನಂನಿಕೆ ಉಳ್ಳವರೂ, ಸಂಪ್ರದಾಯಶರಣರೂ ಅಗಿರುತ್ತಾರೆ. ಇದರಿಂದ ಜನನ ದರ ಮತ್ತು ಮರಣ ದರಗಳೆರಡೂ ಹೆಚ್ಚಾಗಿದ್ದು, ಜನಸಂಖ್ಯಾ ಬೆಳವಣಿಗೆ ದರ ಅತ್ಯಂತ ಕಡಿಮೆಯಿರುತ್ತದೆ.

೨. ಮುಂದುವರಿಯುತ್ತಿರುವ ಹಂತ :

ಹಿಂದುಳಿತದ ದೇಶವು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ತೀವ್ರ ಪ್ರಯತ್ನಗಳನ್ನು ಕೈಗೊಳ್ಳುತ್ತದೆ. ಸರ್ಕಾರವು ಮೊದಲ ಜನರಿಗೆ ಶಿಕ್ಷಣ ನೀಡಲು, ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗುತ್ತದೆ. ಸಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲಾಗುತ್ತದೆ. ಇದರಿಂದ ಮರಣದರ ಶೀಘ್ರವಾಗಿ ಕಡಿಮೆಯಾಗುತ್ತದೆ, ಆದರೆ ಜನನ ದರವು ಹೆಚ್ಚಾಗಿಯೇ ಇದ್ದು, ಅದು ವಿಧಾನವಾಗಿ ಕಡಿಮೆಯಾಗುತ್ತಿರುತ್ತದೆ. ಹೀಗೆ ಈ ಹಂತದಲ್ಲಿ ಜನನ ದರ ಹೆಚ್ಚಿದ್ದು, ಮರಣ ದರ ಕಡಿಮೆಯಾಗುವುದರಿಂದ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿದೆ.

೩. ಮುಂದುವರಿದ ಹಂತ :

ಮುಂದುವರಿಯುತ್ತಿರುವ ದೇಶವು ಅಭಿವೃದ್ಧಿ ಚಟುವಟಿಕೆಗಳನ್ನು ತೀವ್ರಗೊಳಿಸುವ ಮೂಲಕ ಕ್ರಮೇಣ ಮುಂದುವರಿದ ದೇಶವಾಗಿ ಮಾರ್ಪಡುತ್ತದೆ. ಆಗ ದೇಶದಲ್ಲಿರುವ ಎಲ್ಲ ಜನರು ವಿದ್ಯಾವಂತರು ಮತ್ತು ತಿಳುವಳಿಕೆಯುಳ್ಳವರೂ ಅಗಿರುತ್ತಾರೆ. ಎಲ್ಲರಿಗೂ ಆರೋಗ್ಯ ಮತ್ತು ಸ್ವಚ್ಫತೆಯ ಸೌಲಭ್ಯಗಳು ದೊರೆಯುತ್ತವೆ. ಇದರಿಂದಾಗಿ ಈ ಹಂತದಲ್ಲಿ ಜನನ ದರ ಮತ್ತು ಮರಣ ದರಗಳೆರಡೂ ಅತ್ಯಂತ ಕಡಿಮೆಯಿದ್ದು, ಜನಸಂಖ್ಯಾ ಬೆಳವಣಿಗೆ ದರವು ಅತ್ಯಂತ ಕಡಿಮೆಯಾಗುತ್ತದೆ.

ಸಂತಾನೋತ್ಪತ್ತಿ ಆರೋಗ್ಯ ಮತ್ತು ಗುಣಮಟ್ಟ

ಆರೋಗ್ಯವು ಮಾನವನ ಬಹುಮುಖ್ಯ ಸಾಮಾಜಿಕ ಮೂಲಸೌಲಭ್ಯವಾಗಿದೆ. ಉತ್ತಮ ಆರೋಗ್ಯವು ಜನರ ಜೀವನದ ಗುಣಮಟ್ಟ ಮತ್ತು ಅವರ ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸಬೇಕಾದರೆ ದೇಶದ ಜನರ ಆರೋಗ್ಯ ಮಟ್ಟವನ್ನು ಸುಧಾರಿಸಬೇಕಾದ ಅವಶ್ಯಕತೆಯಿದೆ.

ಸಂತಾನೋತ್ಪತ್ತಿಯು ಜೀವಿಗಳ ಪ್ರಧಾನ ಲಕ್ಷಣಗಳಲ್ಲಿ ಒಂದು. ಜನಸಂಖ್ಯೆಯ ಗುಣಮಟ್ಟವು ಜನಿಸಿದ ಮಕ್ಕಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದ ಮೇಲೆ ಬಹುವಾಗಿ ಅವಲಂಬಿಸಿದೆ. ಆರೋಗ್ಯಪೂರ್ಣ ಮಕ್ಕಳು ಗರ್ಭ ಧರಿಸಿದಂದಿನಿಂದ ಮಗುವಿನ ಜನ್ಮ ನೀಡುವವರೆಗೆ ಆಕೆಯ ಆರೋಗ್ಯ ಮತ್ತು ಪೌಷ್ಠಿಕತೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೆರಿಗೆಯ ನಂತರ ತಾಯಿ ಮತ್ತು ಶಿಶುವಿಗೆ ಸೂಕ್ತ ಆರೈಕೆಯನ್ನು ಒದಗಿಸಬೇಕಾಗುತ್ತದೆ. ಮಹಿಳೆಯರು ಆರೋಗ್ಯವಂತರಾಗಿ ರೋಗರಹಿತರಾಗಿ ಇದ್ದರೆ, ಮಕ್ಕಳು ಕೂಡ ಆರೋಗ್ಯವಂತರಾಗಿ ಜನಿಸಿ ಬೆಳೆಯುವುದು ನಿರೀಕ್ಷಿತ. ಆದ್ದರಿಂದ ಆರೋಗ್ಯ ಸೌಲಭ್ಯಗಳಲ್ಲದೇ, ರೋಗಗಳ ನಿಯಂತ್ರಣಕ್ಕಾಗಿ ಲಸಿಕಾ ಆಂದೋಲನ, ಪೌಷ್ಠಿಕಾಂಶಗಳ ನೀಡಿಕೆ ಮತ್ತು ನುರಿತ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಹೆರಿಗೆ ಮಾಡಿಸುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿವೆ.

ಹೀಗಾಗಿ ಎಲ್ಲ ದೇಶಗಳಲ್ಲಿ ಸರ್ಕಾರಗಳು ಈ ಸೌಲಭ್ಯಗಳನ್ನು ಎಲ್ಲರಿಗೂ ಒದಗಿಸುವ ಪ್ರಯತ್ನ ಮಾಡುತ್ತಿವೆ. ಸಂತಾನೋತ್ಪತ್ತಿ ಆರೋಗ್ಯ ಸೌಲಭ್ಯಗಳಿಂದಾಗಿ ಮಕ್ಕಳ ಹಾಗೂ ತಾಯಂದಿರ ಬದುಕುಳಿಯುವಿಕೆಯ ಸಾಧ್ಯತೆ ಹೆಚ್ಚಾಗುವುದರಿಂದ ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇದು ಜನಸಂಖ್ಯಾ ನಿಯಂತ್ರಣಕ್ಕೆ ಪೂರಕ. ಇವಲ್ಲದೇ ಮಕ್ಕಳ, ಗರ್ಭಿಣಿಯರ ಹಾಗೂ ಬಾಣಂತಿಯರ ಪೌಷ್ಠಿಕತೆ ವರ್ಧನೆಗೂ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇವುಗಳಿಂದಾಗಿ ಮಕ್ಕಳ ಮತ್ತು ತಾಯಂದಿರ ಮರಣ ಪ್ರಮಾಣಗಳು ಕಡಿಮೆಯಾಗಿವೆ.

  • ಜನನಿ ಸುರಕ್ಷಾ ಯೋಜನೆಯಡಿ ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವುದು. ಕರ್ನಾಟಕ ಸರ್ಕಾರ ಕೂಡ ತನ್ನ ೨೪x೭ ಉಚಿತ ಅಂಬುಲೆನ್ಸ್‌ ಸೇವೆಯ ಮೂಲಕ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.
  • ಆರೋಗ್ಯ ಉಪ-ಕೇಂದ್ರಗಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ, ಸಮುದಾಯ ಆರೋಗ್ಯ ಕೇಂದ್ರಗಳ ಹಾಗೂ ಜಿಲ್ಲಾ ಆಸ್ಪತ್ರೆಗಳ ಬಲವರ್ಧನ ಮಾಡಿ ಅವುಗಳಲ್ಲಿ ಸಹ ಸಂಪೂರ್ಣ ಹೆರಿಗೆ ಹಾಗೂ ಶಿಶು ಆರೈಕೆ ಸೌಲಭ್ಯಗಳನ್ನು ಒದಗಿಸಲಾಗಿದೆ.
  • ಜನರು ಆರೋಗ್ಯ ಸೇವೆಗಳನ್ನು ಬಳಸಲು ಉತ್ತೇಜಿಸಲಿಕ್ಕೆ ಆಶಾ ಕಾರ್ಯಕರ್ತೆಯರ ನೇಮಕ.
  • ಆರೋಗ್ಯ ಹಾಗೂ ಪೋಷಣೆ ಕುರಿತಾದ ಶಿಕ್ಷಣ ಹಾಗೂ ಜಾಗೃತಿ ನೀಡಿ ಆಹಾರದಲ್ಲಿ ಕಬ್ಬಿಣಾಂಶ ಅಧಿಕವಿರುವ ಹಾಗೆ ಮಾಡುವ ಕಾರ್ಯಕ್ರಮಗಳು.
  • ಸಾರ್ವತ್ರಿಕ ಲಸಿಕೀಕರಣ ಸಾಧಿಸಿ ಮಕ್ಕಳನ್ನು ಬಾಧಿಸುತ್ತಿರುವ ಮಾರಣಾಂತಿಕ ರೋಗಗಳ ಹತೋಟಿ.
  • ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೂರಕ ಪೌಷ್ಠಿಕಾಂಶಗಳನ್ನು ಒದಗಿಸಿ ಅಪೌಷ್ಠಿಕತೆಯನ್ನು ಕಡಿಮೆ ಮಾಡುವುದು. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಸಹ ಇದಕ್ಕೆ ಕೊಡುಗೆ ನೀಡಿದೆ.

FAQ

ಮನುಷ್ಯರಂತೆ ನಿದ್ದೆಯಲ್ಲಿ ಕನಸು ಕಾಣುವ ಜೀವಿ ಯಾವುದು?

ನಾಯಿ.

ಹೊಟ್ಟೆಯಲ್ಲಿ ಹಲ್ಲುಗಳಿರುವ ಪ್ರಾಣಿ ಯಾವುದು?

ಏಡಿ.

ಇತರೆ ವಿಷಯಗಳು :

ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ

ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here