ಸಾವಯವ ಕೃಷಿ ಪ್ರಬಂಧ | Savayava Krishi Prabandha In Kannada

0
1673
ಸಾವಯವ ಕೃಷಿ ಪ್ರಬಂಧ | Savayava Krishi Prabandha In Kannada
ಸಾವಯವ ಕೃಷಿ ಪ್ರಬಂಧ | Savayava Krishi Prabandha In Kannada

ಸಾವಯವ ಕೃಷಿ ಪ್ರಬಂಧ, Organic forming essy in kannada ಸಾವಯವ ಕೃಷಿ ಬಗ್ಗೆ ಪ್ರಬಂಧ, savayava krishi prabandha in kannada savayava krishi essay in kannada


Contents

ಸಾವಯವ ಕೃಷಿ ಪ್ರಬಂಧ

ಸಾವಯವ ಕೃಷಿ ಪ್ರಬಂಧ | Savayava Krishi Prabandha In Kannada
ಸಾವಯವ ಕೃಷಿ ಪ್ರಬಂಧ | Savayava Krishi Prabandha In Kannada

ಮುನ್ನುಡಿ:

ಸಾವಯವ ಕೃಷಿಯಲ್ಲಿ ಸಂಶ್ಲೇಷಿತ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇದು ಹಲವಾರು ಪರಿಸರ ಪ್ರಯೋಜನಗಳನ್ನು ಹೊಂದಿದೆ. ರಾಸಾಯನಿಕ ಬಳಕೆಯಿಂದ ಉಂಟಾಗುವ ಪರಿಸರ ಹಾನಿಗೆ ಪ್ರತಿಕ್ರಿಯೆಯಾಗಿ ಆಧುನಿಕ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಸಾವಯವ ಕೃಷಿಯ ಸವಾಲು ಅದರ ಪರಿಸರ ಪ್ರಯೋಜನಗಳನ್ನು ಕಾಪಾಡಿಕೊಳ್ಳುವುದು, ಇಳುವರಿಯನ್ನು ಹೆಚ್ಚಿಸುವುದು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವಾಗ ಮತ್ತು ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯ ಬೆಲೆಗಳನ್ನು ಕಡಿಮೆ ಮಾಡುವುದು.ಈಗಿನ ಆಧುನಿಕ ಕಾಲಘಟ್ಟದಲ್ಲಿ ಬಹುತೇಕ ಯುವಕರು ಮತ್ತು ಜನರು ಕೃಷಿಯಲ್ಲಿ ನಿರಾಸಕ್ತಿ ತೋರುತ್ತಿರುವುದು ಒಂದುಕಡೆ ಆದರೆ, ಕೆಲವರು ಕೃಷಿಯಲ್ಲಿ ಉತ್ತಮವಾದಂತಹ ಆದಾಯ ಹಾಗೂ ನೆಮ್ಮದಿ ಕಂಡುಕೊಂಡು, ಕೃಷಿಯ ಸಹಾಯದಿಂದ ಜೀವನದಲ್ಲಿ ಮುಂದೆ ಬಂದಿದ್ದಾರೆ.

ವಿಷಯ ವಿಸ್ತರಣೆ:

ಸಾವಯವ ಕೃಷಿಗೆ ಸಾವಯವ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆಯನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಂಡು ಉತ್ತಮ ಬೇಸಾಯನ್ನು ಮಾಡಬಹುದು. ಸಾವಯವ ಗೊಬ್ಬರಗಳಾದ ಜೀವಾಮೃತ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರಗಳನ್ನು ನಾವು ಬೇಸಾಯಕ್ಕೆ ಬಳಸುವುದರಿಂದ ಪೌಷ್ಠಿಕ ಆಹಾರದ ಉತ್ಪನಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಸಾವಯವ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸಲು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು. ಸಾವಯವ ಕೃಷಿಯು ಕಡಿಮೆ ಇಳುವರಿ ಕೊಡುವುದಾದರೂ ಇದರಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕುಂದಿಸಲಾಗುವುದಿಲ್ಲ.

ಸಾವಯುವ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳು ಮತ್ತು ಬೆಳೆಗಳು ಆರೋಗ್ಯಕರವಾಗಿ ಮತ್ತು ಸಧೃಢತೆಯಿಂದ ಕೂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ. ಉತ್ತಮ ಆಹಾರದತ್ತ ಕಾಳಜಿ ವಹಿಸುತ್ತಿದ್ದಾರೆ. ಸಾವಯವ ಕೃಷಿಯು ಸುಸ್ಥಿರತೆ, ಜೈವಿಕ ವೈವಿದ್ಯತೆ, ಮಣ್ಣಿನ ಫಲವತ್ತತ್ತೆಯ ವರ್ಧನೆಗಾಗಿ ಶ್ರಮಿಸುವ ಸಮಗ್ರ ಕೃಷಿ ವ್ಯವಸ್ಥೆಯಾಗಿದೆ.ಸಾವಯವ ಕೃಷಿಗೆ ಸಸ್ಯ ಮತ್ತು ಪ್ರಾಣಿಯಿಂದ ಪಡೆದ ಕೀಟ ನಿಯಂತ್ರಣವನ್ನು ಬಳಸುತ್ತದೆ. ಈ ಕೃಷಿಯು ಪರಿಸರವನ್ನು ಸಮತೋಲನವನ್ನು ಕಾಪಾಡುತ್ತದೆ.

ಸಾವಯವ ಕೃಷಿಯಲ್ಲಿ ಸಾವಯವ ಗೊಬ್ಬರದಲ್ಲಿನ ರಾಸಾಯನಿಕ ಸಂಯೋಜನೆ ಮತ್ತು ಪೋಷಕಾಂಶಗಳ ಅಂಶವು ಗೊಬ್ಬರದಲ್ಲಿ ಬಳಸುವ ಕಚ್ಚಾವಸ್ತುವಿನ ವಿಧ ಹಾಗೂ ತಯಾರಿಕಾ ವಿಧಾನಗಳನ್ನು ಅವಲಂಬಿಸಿದ್ದು, ಪ್ರಾಣವು ಕಡಿಮೆ ಇರುತ್ತದೆ. ಇದು ಸಸ್ಯಗಳಿಗೆ ಪೋಷಕಾಂಶಗಲನ್ನು ಒದಗಿಸುವುದಲ್ಲದೇ, ನೀರು ಹಿಡಿದಿಡುವ ಸಾಮರ್ಥ್ಯ ಮಣ್ಣಿನ ರಚನೆ ಮತ್ತು ಸೂಕ್ಷ್ಮಜೀವಿಗಳ ಸಂಖ್ಯೆಗಳ ಸುಧಾರಣೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಉಪಸಂಹಾರ:

ಸಾವಯವ ಕೃಷಿಯು ಇಂದು ನಿನ್ನೆದೆಯಲ್ಲ , ಬದಲಾಗಿ ಕೃಷಿ ಪದ್ಧತಿಯ ಹುಟ್ಟು ಸಾವಯವದ ಆಧಾರವಾಗಿತ್ತು. ನಾವು ಬೆಳೆಯುವ ಬೆಳೆಗಳಿಗೆ ಜೈವಿಕ ಗೊಬ್ಬರಗಳನ್ನು ಬಳಸುವುದರಿಂದ ಆಹಾರ ಪದಾರ್ಥಗಳು ಶಕ್ತಿಯುತವಾದ ಆಹಾರಗಳನ್ನು ನೀಡುತ್ತದೆ. ಸಾವಯವ ಕೃಷಿಯು ನೈಸರ್ಗಿಕವಾದ ಪದ್ದತಿಯಾಗಿದೆ. ಸಾವು ಸಾವಯವ ಕೃಷಿಯನ್ನು ಅವಲಂಬಿಸಬೇಕು.

FAQ :

ಸಾವಯವ ಕೃಷಿ ಎಂದರೇನು?

ನೈಸರ್ಗಿಕ ಸಮತೋಲನವನ್ನು ಅಡ್ಡಿಪಡಿಸದೆ ಆರೋಗ್ಯಕರ ಉತ್ಪನ್ನಗಳನ್ನು ಬೆಳೆಯುವುದನ್ನು ಸಾವಯವ ಕೃಷಿ ಎನ್ನುವರು.

ಸಾವಯವ ಕೃಷಿಯ ಉಪಯೋಗಗಳು?

ಇಳುವರಿ ಹೆಚ್ಚಾಗಿರುತ್ತದೆ.
ಆರೋಗ್ಯಯುತ ಬೆಳೆಯನ್ನು ಬೆಳೆಯುತ್ತಾರೆ.

ಕೃಷಿಯ ವಿಧಗಳು?

ಪ್ರಾಚೀನ ಜೀವನಾಧಾರ ವ್ಯವಸಾಯ.
ಸಾಂದ್ರ ಬೇಸಾಯ
ತೋಟಗಾರಿಕೆ ಬೇಸಾಯ

ಇತರೆ ವಿಷಯಗಳು:

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಬರೆಯಿರಿ

ಯೋಗ ಅಭ್ಯಾಸ ಪ್ರಬಂಧ

ವಿದ್ಯಾರ್ಥಿ ಜೀವನ ಪ್ರಬಂಧ

ಕಂಪ್ಯೂಟರ್ ಮಹತ್ವ ಪ್ರಬಂಧ 

LEAVE A REPLY

Please enter your comment!
Please enter your name here