ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರ ಬಗ್ಗೆ ಮಾಹಿತಿ, N S Lakshminarayana Bhatta Information in Kannada, ns lakshminarayana bhatta biography in kannada
Contents
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರ ಬಗ್ಗೆ ಮಾಹಿತಿ
![](https://i0.wp.com/kannadanew.com/wp-content/uploads/2022/10/N-S-Lakshminarayana-Bhatta-Information-in-Kannada.jpg?resize=279%2C172&ssl=1)
ಈ ಲೇಖನಿಯಲ್ಲಿ ಎನ್ ಎಸ್ ಲಕ್ಷೀ ನಾರಾಯಣ ಭಟ್ಟ ಅವರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ postನಲ್ಲಿ ತಿಳಿಸಿದ್ದೇವೆ.
ಜೀವನ
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾದರು.
ಸಾಹಿತ್ಯ ಲೋಕದಲ್ಲಿ ‘ಎನ್ಎಸ್ಎಲ್’ ಎಂದೇ ಜನಪ್ರಿಯರಾಗಿರುವ ಇವರು 1936ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದರು. ಭಟ್ಟರು ತಮ್ಮ ಭಾವಗೀತೆಗಳ ಮೂಲಕ (ಭಾವಗೀತೆಗಳು) ಮನೆಮಾತಾಗಿದ್ದಾರೆ ಮತ್ತು ಆಧುನಿಕ ಕನ್ನಡ ಕಾವ್ಯ, ವಿಮರ್ಶಾತ್ಮಕ ಕೃತಿಗಳು ಮತ್ತು ಅನುವಾದಗಳ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ. ಅವರು ಸುಮಾರು 50 ವಿಲಿಯಂ ಷೇಕ್ಸ್ಪಿಯರ್ ಸಾನೆಟ್ಗಳು, ಟಿಎಸ್ ಎಲಿಯಟ್ನ ಕವನ ಮತ್ತು ಕವಿ ಯೀಟ್ಸ್ನ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅವರ ಜನಪ್ರಿಯ ಕೃತಿಗಳಲ್ಲಿ “ತಾಯೆ ನಿನ್ನ ಮಡಿಲಲಿ” ಸೇರಿದೆ.
ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು, ಕನ್ನಡ ಸಾಹಿತ್ಯ ವಿಭಾಗದಲ್ಲಿ ಕೆಲಸ ಮಾಡಿದರು ಮತ್ತು ಸಂತ-ಕವಿ ಶಿಶುನಾಳ ಷರೀಫ್ ಅವರ ಕೃತಿಗಳನ್ನು ಜನಪ್ರಿಯಗೊಳಿಸುವುದಕ್ಕಾಗಿ ಗೌರವಾನ್ವಿತರಾಗಿದ್ದಾರೆ.
ವಿದ್ಯಾಭ್ಯಾಸ
ಶಿವಮೊಗ್ಗದಲ್ಲಿ ‘ಇಂಟರ್ ಮೀಡಿಯೆಟ್ ಮುಗಿಸಿ’, ಕನ್ನಡ ’ಎಂ.ಎ. ಆನರ್ಸ್ ಪದವಿ’ ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ’ತೀನಂಶ್ರೀ’ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ’ಅಧ್ಯಾಪಕ’, ’ರೀಡರ್’, ’ಪ್ರಾಧ್ಯಾಪಕ’, ’ನಿರ್ದೇಶಕ’೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಈ ಎಲ್ಲಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ವಿಮರ್ಶೆ
- ಹೊರಳು ದಾರಿಯಲ್ಲಿ ಕಾವ್ಯ
- ವಿವೇಚನ
- ಕಾವ್ಯಶೋಧನ
ಪುರಸ್ಕಾರ
- ೧೯೭೪ – ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’- “ಹೊರಳು ದಾರಿಯಲ್ಲಿ ಕಾವ್ಯ” ವಿಮರ್ಶಾಕೃತಿಗೆ
- ೨೦೧೨ – ‘ಅನಕೃ ಪ್ರಶಸ್ತಿ’
ನಿಧನ
ಭಟ್ಟರು ೨೦೨೧ರ ಮಾರ್ಚ್ ೬ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ೮೪ ವರ್ಷ ವಯಸ್ಸಾಗಿತ್ತು.
‘ನೀ ಸಿಗದೆ ಬಾಳೊಂದು ಬಾಳು ಕೃಷ್ಣ’, ‘ಅಮ್ಮಾ ಎಂಬ ಮಾತಿಗಿಂತ’, ‘ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ…’ ಮುಂತಾದ ಪ್ರಸಿದ್ಧ ಭಾವಗೀತೆಗಳನ್ನು ರಚಿಸಿರುವ ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ಸಾಹಿತ್ಯ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಇತರೆ ವಿಷಯಗಳು: