8th Day Of Navratri in Kannada, ನವರಾತ್ರಿ ಎಂಟನೇ ದಿನದ ವಿಶೇಷತೆ, navaratri 8th day devi in kannada, navratri devi mahagauri in kannada
Contents
ಈ ಲೇಖನಿಯಲ್ಲಿ ನವರಾತ್ರಿಯ ಎಂಟನೇ ದಿನದ ವಿಶೇಷತೆ ಬಗ್ಗೆ ನಿಮಗೆ ನಮ್ಮ postನ ಮೂಲಕ ತಿಳಿಸಿದ್ದೇನೆ.
ನವರಾತ್ರಿ ಎಂಟನೇ ದಿನದ ವಿಶೇಷತೆ
ಮಹಾಗೌರಿ ದೇವಿಯು ದುರ್ಗಾ ದೇವಿಯ ಎಂಟನೆಯ ಶಕ್ತಿ. ಆಕೆಯು ಸ್ವಭಾವತಃ ತುಂಬಾನೇ ಸೌಮ್ಯ. ಆಕೆ ರೂಪದಲ್ಲೂ ಅತ್ಯಂತ ಸರಳವಾಗಿದ್ದಾಳೆ. ಮಹಾಗೌರಿ ದೇವಿಯು ತುಂಬಾ ಸುಂದರವಾದ, ಆಕರ್ಷಣೀಯವಾದ ರೂಪವನ್ನು ಹೊಂದಿದ್ದಾಳೆ. ಅವರ ಬಟ್ಟೆ, ಆಭರಣ ಇತ್ಯಾದಿಗಳೂ ಬಿಳಿ ಬಣ್ಣದಲ್ಲಿರುತ್ತದೆ. ಅವಳಿಗೆ ನಾಲ್ಕು ತೋಳುಗಳಿವೆ. ಮಹಾಗೌರಿಯ ವಾಹನ ಗೂಳಿ. ದೇವಿಯ ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲವಿದೆ. ಮೇಲಿನ ಎಡಗೈ ಡಮರು ಮತ್ತು ಕೆಳಗಿನ ಕೈಯಲ್ಲಿ ವರ ಮುದ್ರೆಯನ್ನು ಹಿಡಿದಿರುತ್ತಾಳೆ. ಅವರ ಸ್ವಭಾವವು ತುಂಬಾ ಶಾಂತವಾಗಿರುತ್ತದೆ. ತಾಯಿಯ ಈ ರೂಪವನ್ನು ಅನ್ನಪೂರ್ಣ, ಐಶ್ವರ್ಯ, ಪ್ರದಾಯಿನಿ ಮತ್ತು ಚೈತನ್ಯಮಯ ಎಂದೂ ಕರೆಯುತ್ತಾರೆ.
ಮಹಾಗೌರಿಯ ಕಥೆ
ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.
ಮಹಾಗೌರಿ ತಾಯಿಯ ಪೂಜೆಯ ಮಹತ್ವ
ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಬೇಕಾಗಿರುವ ಎಲ್ಲವನ್ನು ಆಕೆ ಕರುಣಿಸವಳು. ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.
ಮಹಾಗೌರಿ ಪೂಜೆ ವಿಧಾನ
ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಮತ್ತು ಶುಭ್ರವಾದ ಮತ್ತು ಸುಂದರವಾದ ಬಟ್ಟೆಗಳನ್ನು ಧರಿಸಿ. ಮೊದಲನೆಯದಾಗಿ, ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಕಿ, ಗಂಗಾಜಲವನ್ನು ಚಿಮುಕಿಸಿ ಶುದ್ಧೀಕರಿಸಿ. ನಂತರ ಅದರ ಮೇಲೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಇದಾದ ನಂತರ ಅಮ್ಮನ ಮೂರ್ತಿಯನ್ನೂ ಪ್ರತಿಷ್ಠಾಪಿಸಬೇಕು. ನಂತರ ಕಲಶ ಪೂಜೆ ಮಾಡಬೇಕು. ಪಂಚಾಮೃತದೊಂದಿಗೆ ಭಗವಾನ್ ಗಣೇಶನಿಗೆ, ತಾಯಿ ಸತರಸ್ವತಿಗೆ ಅಭಿಷೇಕವನ್ನು ಮಾಡಿಸಬೇಕು. ಸ್ನಾನ ಮುಗಿಸಿ ಗಣೇಶನಿಗೆ ಹೊಸ ಬಟ್ಟೆ ತೊಡಿಸಿ, ಅಮ್ಮನಿಗೆ ಅಲಂಕಾರ ಮಾಡಿ. ದಾಸವಾಳದ ಹೂವು, ಅಕ್ಷತೆ, ಕುಂಕುಮ, ಸಿಂಧೂರ, ಪಾನ್, ವೀಳ್ಯದೆಲೆ ಇತ್ಯಾದಿಗಳನ್ನು ತಾಯಿಗೆ ಅರ್ಪಿಸಿ.
ಮಹಾ ಗೌರಿ ಧ್ಯಾನ
ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಂಹರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್
ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಂ ಮಹಾಗೌರಿ ತ್ರಿನೇತಂ
ವರಭೀತಿಕಾರಾಮ್ ತ್ರಿಶೂಲಾ ಢಮಾರುಧರಂ ಮಹಾಗೌರಿ ಭಜೆಮ್
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ
ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್
ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ
ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ
ಇತರೆ ವಿಷಯಗಳು: