ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ | Essay on National Mathematics Day in Kannada

0
864
ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ | Essay on National Mathematics Day in Kannada
ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ | Essay on National Mathematics Day in Kannada

ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ Essay on National Mathematics Day in Kannada National Mathematics Prabandha Day in Kannada


Contents

ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ

Essay on National Mathematics Day in Kannada

ರಾಷ್ಟ್ರೀಯ ಗಣಿತ ದಿನ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ರಾಷ್ಟ್ರೀಯ ಗಣಿತ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಪ್ರತಿನಿತ್ಯ ಮನುಷ್ಯನ ಜೀವನದಲ್ಲಿ ಗಣಿತ ಒಂದಲ್ಲ ಒಂದು ರೂಪದಲ್ಲಿ ಬಳಕೆಯಾಗುತ್ತಲೇ ಇರುತ್ತದೆ, ಅದು ದೊಡ್ಡ ಮಟ್ಟದಲ್ಲಿರಬಹುದು, ಇಲ್ಲವೇ ಸಣ್ಣ ಮಟ್ಟದಲ್ಲಿರಬಹುದು, ಲೆಕ್ಕಕ್ಕೂ-ಮನುಷ್ಯ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ದಿನವು ನಮ್ಮ ಜೀವನದಲ್ಲಿ ಗಣಿತದ ಪ್ರಾಮುಖ್ಯತೆಯನ್ನು ಗುರುತಿಸುವುದು, ಸ್ವಯಂ-ಕಲಿಕೆ ಮತ್ತು ತಾರ್ಕಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಜನರನ್ನು ಪ್ರೋತ್ಸಾಹಿಸುವುದು.

ವಿಷಯ ವಿವರಣೆ

2012 ರಿಂದ ಡಿಸೆಂಬರ್ 22 ಅನ್ನು ‘National Mathematics Day’ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನ’ವಾಗಿ ಆಚರಿಸಲು 2012ರಲ್ಲಿ ಅಂದಿನ ಪ್ರಧಾನಿ ಡಾ ಮನಮೋಹನ್‌ ಸಿಂಗ್ ಅವರು ಕರೆಕೊಟ್ಟರು. ರಾಮಾನುಜನ್ ಅವರ 125ನೇ ಜನ್ಮ ಜಯಂತಿ ಆಚರಣೆ ಸಂದರ್ಭದಲ್ಲಿ ಅಂದು ಮದ್ರಾಸ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಗಣಿತ ದಿನ ಎಂದು ಘೋಷಣೆ ಮಾಡಿದ್ದರು.

ಗಣಿತದ ಪಿತಾಮಹರಾದ ಶ್ರೀನಿವಾಸ ರಾಮಾನುಜನ್

ತಮಿಳುನಾಡಿನ ಈರೋಡ್‌ನಲ್ಲಿ ಡಿಸೆಂಬರ್‌ 22, 1887 ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ರವರು ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತದೆ. ‘The Man Who Knew Infinity’ ಎಂದೇ ರಾಮಾನುಜನ್ ಅವರು ಪ್ರಖ್ಯಾತರು. ಗಣಿತ ವಿಷಯದ ಬಗ್ಗೆ ರಾಮಾನುಜನ್ ಅವರಿಗೆ ಅಷ್ಟು ಒಲವು, ಪ್ರೀತಿ, ಆಳವಾದ ಜ್ಞಾನವಿತ್ತು.

ಚಿಕ್ಕವರಿದ್ದಾಗಲೇ ಅವರಿಗೆ ಗಣಿತವೆಂದರೆ ಬಾಳೆಹಣ್ಣು ಸುಲಿದು ತಿಂದಂತೆ. ಅವರ ಸಹಪಾಠಿಗಳಿಗೆ ಶಾಲಾ ದಿನಗಳಲ್ಲಿ ಬೀಜಗಣಿತ, ತ್ರಿಕೋನಮಿತೀಯ ಸಮಸ್ಯೆಯಾಗಿದ್ದರೆ ರಾಮಾನುಜಂ ಅವರು ಸುಲಭವಾಗಿ ಬಗೆಹರಿಸುತ್ತಿದ್ದರು. ರಾಮಾನುಜನ್ ಅವರು 17 ನೇ ವಯಸ್ಸಿನಲ್ಲಿ ಕುಂಭಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಪಡೆದರು. ಆದಾಗ್ಯೂ, ಅವರು ಇತರ ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸುವಲ್ಲಿ ವಿಫಲರಾಗಿ ಬರುತ್ತಿದ್ದ ವಿದ್ಯಾರ್ಥಿವೇತನ ನಿಂತುಹೋಯಿತು. ಆದರೆ ಅವರು ಭರವಸೆ ಕಳೆದುಕೊಳ್ಳಲಿಲ್ಲ, ಜರ್ನಲ್ ಆಫ್ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಗೆ ಕೊಡುಗೆ ನೀಡುವಾಗ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

26ನೇ ವಯಸ್ಸಿನಲ್ಲಿ ರಾಮಾನುಜನ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಅನಂತ ಸರಣಿಗಳು, ಮುಂದುವರಿದ ಭಿನ್ನರಾಶಿಗಳು, ಅಸಮರ್ಪಕ ಅನುಕಲನಗಳು ಮತ್ತು ಸಂಖ್ಯಾ ಸಿದ್ಧಾಂತದ ಕುರಿತು 120 ಗಣಿತದ ಪ್ರಮೇಯಗಳ ಹೇಳಿಕೆಗಳಿಗಾಗಿ ಅವರನ್ನು ಆಹ್ವಾನಿಸಲಾಗಿತ್ತು. ಟ್ರಿನಿಟಿ ಕಾಲೇಜಿನಲ್ಲಿ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಶ್ರೀನಿವಾಸ ರಾಮಾನುಜನ್. ಎಲಿಪ್ಟಿಕ್ ಫಂಕ್ಷನ್‌ಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಕುರಿತು ತಮ್ಮ ಕೆಲಸಕ್ಕಾಗಿ ಲಂಡನ್‌ನ ರಾಯಲ್ ಸೊಸೈಟಿಯ ಕಿರಿಯ ಫೆಲೋ ಆಗಿದ್ದರು. 3,000 ಕ್ಕೂ ಹೆಚ್ಚು ಗಣಿತದ ಫಲಿತಾಂಶಗಳು ಮತ್ತು ಸಮೀಕರಣಗಳನ್ನು ಸಂಗ್ರಹಿಸಿದ ನಂತರ, ಗಣಿತಜ್ಞ 1919 ರಲ್ಲಿ ಭಾರತಕ್ಕೆ ಮರಳಿದರು. 1920ರಲ್ಲಿ ಕ್ಷಯರೋಗದಿಂದಾಗಿ ನಿಧನರಾದರು.

ಗಣಿತಶಾಸ್ತ್ರಕ್ಕೆ ರಾಮಾನುಜನ್ ಅವರ ಕೊಡುಗೆಗಳು

ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅವರ ನೈಸರ್ಗಿಕ ಗಣಿತದ ತೇಜಸ್ಸಿಗಾಗಿ ಅವರನ್ನು ಗಣಿತ ಮಾಂತ್ರಿಕ ಎಂದೂ ಕರೆಯಲಾಯಿತು. ಅವರು ಸಂಖ್ಯಾ ಸಿದ್ಧಾಂತಗಳು, ಅನಂತ ಸರಣಿಗಳು ಮತ್ತು ಮುಂದುವರಿದ ಭಿನ್ನರಾಶಿಗಳಲ್ಲಿ ಪಾಂಡಿತ್ಯವನ್ನು ಪಡೆದರು. ಅವರ ಸಾಮಾನ್ಯ ಗುಣಲಕ್ಷಣಗಳನ್ನು ಸೆರೆಹಿಡಿಯುವಾಗ ಅವರು ಜಾಕೋಬಿ ಥೀಟಾ ಕಾರ್ಯಗಳ ರೂಪವನ್ನು ಸಾಮಾನ್ಯೀಕರಿಸಿದರು. ಜಾಕೋಬಿ ಥೀಟಾ ಫಂಕ್ಷನ್‌ನ ಸಾಮಾನ್ಯ ರೂಪವನ್ನು ರಾಮಾನುಜನ್ ಥೀಟಾ ಫಂಕ್ಷನ್ಸ್ ಎಂದು ಹೆಸರಿಸಲಾಯಿತು. ರಾಮಾನುಜನ್ ಅವರು 1916ರಲ್ಲಿ ರಾಮಾನುಜನ್ ಅವರು ವಿಜ್ಞಾನದಲ್ಲಿ ಪದವಿ ಪಡೆದರು. 1917ರಲ್ಲಿ ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಯ ಸದಸ್ಯರಾಗಿದ್ದರು. 1919ರಲ್ಲಿ ಅವರು ಭಾರತಕ್ಕೆ ಮರಳಿದರು. 1920 ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದರು.

ರಾಷ್ಟ್ರೀಯ ಗಣಿತ ದಿನ ಆಚರಣೆಯ ಮಹತ್ವ

ಪ್ರಾಚೀನ ಕಾಲದಿಂದಲೂ ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ II, ಶ್ರೀನಿವಾಸ ರಾಮಾನುಜನ್ ಸೇರಿದಂತೆ ಗಣಿತಶಾಸ್ತ್ರಕ್ಕೆ ಹಲವಾರು ವಿದ್ವಾಂಸರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ, ಶ್ರೀನಿವಾಸ ರಾಮಾನುಜನ್ ಅವರು ಅನಾವರಣಗೊಳ್ಳುವ ಪ್ರತಿಭೆಯ ಲಕ್ಷಣಗಳನ್ನು ತೋರಿಸಿದರು ಮತ್ತು ಭಿನ್ನರಾಶಿಗಳು, ಅನಂತ ಸರಣಿಗಳ ಬಗ್ಗೆ ಅವರ ಕೊಡುಗೆಗಳನ್ನು ತೋರಿಸಿದರು. ಸಂಖ್ಯಾ ಸಿದ್ಧಾಂತ, ಗಣಿತದ ವಿಶ್ಲೇಷಣೆ, ಇತ್ಯಾದಿ ಗಣಿತಶಾಸ್ತ್ರದಲ್ಲಿ ಒಂದು ಉದಾಹರಣೆಯಾಗಿದೆ.

ಮಾನವೀಯತೆಯ ಬೆಳವಣಿಗೆ, ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ ‘ರಾಷ್ಟ್ರೀಯ ಗಣಿತ ದಿನ’ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರದ ಯುವ ಪೀಳಿಗೆಗೆ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಮ್ಮದೇ ದೇಶದ ಗಣಿತಜ್ಞ ಶ್ರೀನಿವಾಸ ರಾಮಾನುಜನರ್‌ ರವರ ಕೊಡುಗೆಗಳನ್ನು ತಿಳಿಸುವುದು, ಯುವ ಪೀಳಿಗೆಯಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು, ಯುವಕರಲ್ಲಿ ಗಣಿತ ಕಲಿಕೆಯಿಂದ ಆಗುವ ಉಪಯೋಗಗಳನ್ನು ತಿಳಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವು ಸಹ. ಗಣಿತ ದಿನ ಆಚರಣೆ ದಿನದಂದು ಶಿಬಿರಗಳ ಮೂಲಕ ಗಣಿತ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಸಂಬಂಧಿತ ಕ್ಷೇತ್ರಗಳಲ್ಲಿ ಗಣಿತ ಮತ್ತು ಸಂಶೋಧನೆಗಾಗಿ ಬೋಧನಾ -ಕಲಿಕಾ ಸಾಮಾಗ್ರಿಗಳ (ಟಿಎಲ್‌ಎಂ) ಅಭಿವೃದ್ಧಿ, ಉತ್ಪಾದನೆ ಮತ್ತು ಪ್ರಸರಣದ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಉಪಸಂಹಾರ

ಗಣಿತವು ಕಬ್ಬಿಣದ ಕಡಲೆ ಎಂದುಕೊಂಡವರಿಗೆ ಸುಲಿತ ಬಾಳೆ ಹಣ್ಣಿನಂತೆ ಎಂಬುದನ್ನು ಅರ್ಥಮಾಡಿಸಬೇಕು. ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವುದು. ದೇಶದ ಯುವ ಪೀಳಿಗೆಗೆಯಲ್ಲಿ ಗಣಿತ ಕಲಿಯುವ ಕುರಿತು ಸಕರಾತ್ಮಕ ಮನೋಬಾವವನ್ನು ಪ್ರೇರೇಪಿಸುವುದು. ಇದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.

FAQ

ಗಣಿತದ ಪಿತಾಮಹ ಯಾರು ?

ಶ್ರೀನಿವಾಸ ರಾಮಾನುಜನ್

ರಾಷ್ಟ್ರೀಯ ಗಣಿತ ದಿನವನ್ನು ಯಾವಾಗ ಆಚರಿಸುತ್ತಾರೆ ?

ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತಾರೆ.

ಇತರೆ ವಿಷಯಗಳು :

ಏಡ್ಸ್ ದಿನದ ಬಗ್ಗೆ ಮಾಹಿತಿ

ರೈತ ದೇಶದ ಬೆನ್ನೆಲುಬು ಪ್ರಬಂಧ 

LEAVE A REPLY

Please enter your comment!
Please enter your name here